ಮಲ್ಪೆ: ಬೋಟಿನಿಂದ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು
Update: 2020-11-22 15:52 GMT
ಮಲ್ಪೆ, ನ.22: ಮಲ್ಪೆ ಬಂದರಿನ ಬೋಟಿನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆಗೆ ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಮಲ್ಪೆ ಬೀಚ್ನ ಜ್ಞಾನಜ್ಯೋತಿ ಭಜನಾ ಮಂದಿರದ ಹತ್ತಿರ ನಿವಾಸಿ ಚಂದ್ರಕಾಂತ ಮೆಂಡನ್(38) ಎಂದು ಗುರುತಿಸಲಾಗಿದೆ. ಇವರು ಗೋಪಾಲ ಎಂಬವರ ಮಾಲೀಕತ್ವದ ಗಣೇಶ ಕೃಪ ಎಂಬ ಬೋಟಿನಲ್ಲಿ ಪೈಪ್ ಲೈನ್ ಸರ್ವೆ ಬಗ್ಗೆ ಕೆಲಸ ಮಾಡುತ್ತಿದ್ದರು. ನ.21ರಂದು ರಾತ್ರಿ ಬೋಟಿನಲ್ಲಿ ಮಲಗಿದ್ದ ಇವರು ಮೂತ್ರ ವಿಸರ್ಜನೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಇವರ ಮೃತದೇಹವು ನ.22ರಂದು ಬೆಳಗ್ಗೆ ಬಂದರಿನ ಅಳಿವೆ ಬಾಗಿಲು ಬಳಿ ಸಮುದ್ರದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.