ಎಸ್ಕೆಎಸೆಸ್ಸೆಫ್ ಟ್ರೆಂಡ್ ಓರಿಯೆಂಟೇಶನ್ ಕಾರ್ಯಕ್ರಮ

Update: 2020-11-23 14:05 GMT

ಮಂಗಳೂರು, ನ.23: ಎಸ್ಕೆಎಸೆಸ್ಸೆಫ್ ಶೈಕ್ಷಣಿಕ ಕ್ಷೇತ್ರದ ಉಪ ಸಮಿತಿ ‘ಟ್ರೆಂಡ್ ಸ್ಮೈಲ್ ಪ್ರಾಜೆಕ್ಟೃ್; ಇದರ ಓರಿಯೆಂಟೇಶನ್ ಕಾರ್ಯಕ್ರಮ ಫರಂಗಿಪೇಟೆಯ ಕುಂಪನಮಜಲು ಜುವೈರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಮಂಗಳೂರು ಕೇಂದ್ರ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ ದುಆ ಮೂಲಕ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಪ್ರಧಾನ ಕಾರ್ಯದರ್ಶಿ ಸತ್ತಾರ್ ಸಾಹೇಬ್ ಪಂದಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿಖಾಯ ಉಸ್ತುವಾರಿ ಕಾರ್ಯದರ್ಶಿ ಇಸಾಕ್ ಹಾಜಿ ತೋಡಾರ್, ಕನ್ವೀನರ್ ಅಬ್ದುಲ್ ಸಲಾಂ ಅಡ್ಡೂರು, ಇಲಲ್ ರಾಫಿ, ವೈಸ್ ಕನ್ವೀನರ್ ನಬ್ಸೀರ್, ಸಿದ್ದೀಕ್ ನಾವೂರು, ನೌಶಾದ್ ಅನ್ಸಾರಿ, ಸಫ್ವಾನ್ ಬಂಟ್ವಾಳ, ಲಿಯಾವುದ್ದೀನ್, ಯಾಸೀರ್ ಉಪಸ್ಥಿತರಿದ್ದರು.

ಟ್ರೆಂಡ್ ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್ ಸಮದ್ ಸಾಲೆತ್ತೂರು ಸ್ವಾಗತಿಸಿದರು. ಉಪಾಧ್ಯಕ್ಷ ಬದ್ರುದ್ದೀನ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News