ಚಾಲಕನಿಂದಲೇ ಟಿಪ್ಪರ್ ಕಳವು

Update: 2020-11-23 15:11 GMT

ಕುಂದಾಪುರ, ನ.23: ಚಾಲಕನೋರ್ವ ಟಿಪ್ಪರ್‌ನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಉಸ್ಮಾನ್ ಎಂಬವರ ಕೆಎ-20-ಎಎ -1218ನೆ ನಂಬರಿನ 407 ಟಾಟಾ ಟಿಪ್ಪರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಪರುಶುರಾಮ ಎಂಬವರು ಚಾಲಕನಾಗಿ ಕೆಲಸ ಮಾಡಿ ಕೊಂಡಿದ್ದು, ನ.20ರಂದು ಮನೆಯ ಬಳಿ ನಿಲ್ಲಿಸಿದ ಟಿಪ್ಪರನ್ನು ಆತ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News