ದರೋಡೆ ಯತ್ನ ಪ್ರಕರಣ : ಆರೋಪಿಗಳು ಸೆರೆ

Update: 2020-11-23 17:00 GMT

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ನಡೆದ ಮನೆ ದರೋಡೆ ಯತ್ನ ಪ್ರಕರಣದ ತನಿಖೆ ನಡೆಸಿದ  ಬೆಳ್ತಂಗಡಿ  ವೃತ್ತ ನಿರೀಕ್ಷಕರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಬಂಟ್ವಾಳ ತಾಲೂಕು ಮೇಲ್ಕಾರ್ ಬಳಿ ನಿವಾಸಿ ಇರ್ಫಾನ್ ( 28) ಮತ್ತು  ತೌಸೀಫ್ ಯಾನೆ ತಚ್ಚು (26), ಬೆಳಾಲು ನಿವಾಸಿ ಚಿದಾನಂದ ಗೌಡ (25) ಹಾಗೂ ಕಲ್ಮಂಜ ನಿವಾಸಿ ಮೋಹನ  (32)  ಎಂಬವರನ್ನು, ವಶಕ್ಕೆ ಪಡೆದು ಠಾಣೆಗೆ ತಂದು  ಕೂಲಂಕುಶವಾಗಿ ವಿಚಾರಿಸಿದಾಗ, ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಈ ಪ್ರಕರಣದಲ್ಲಿ  ದಸ್ತಗಿಯಾಗಿರುವ  ತೌಸೀಫ್ ಯಾನೆ ತಚ್ಚು ಈ ಮೊದಲು ಅನೇಕ ಪ್ರಕಣಗಳಲ್ಲಿ ಭಾಗಿರುವುದಾಗಿದೆ. ಇದೇ ಪ್ತಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News