26 ಫಲಾನುಭವಿಗಳಿಗೆ ಖಾಯಂ ನಿವೇಶನ ಹಕ್ಕುಪತ್ರ ವಿತರಣೆ

Update: 2020-11-24 13:45 GMT

ಬ್ರಹ್ಮಾವರ, ನ.24: ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಒಟ್ಟು 26 ಫಲಾನುಭವಿಗಳಿಗೆ 94ಸಿಸಿ ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕ ಕೆ.ರಘುಪತಿ ಭಟ್ ಮಂಗಳವಾರ ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಸುಮಾರು 20 ವರ್ಷಗಳಿಂದ ವಾಸವಾಗಿರುವ ಬೈಕಾಡಿ ಗ್ರಾಮದ 22 ಕುಟುಂಬಗಳ ಫಲಾನುಭವಿಗಳು, ಹೇರೂರು ಗ್ರಾಮದ 2 ಫಲಾನುಭವಿ ಗಳು, 38ನೆ ಕಳ್ತೂರು ಮತ್ತು ಹೊಸೂರು ಗ್ರಾಮದ ತಲಾ ಒಬ್ಬರು ಫಲಾನುಭವಿಗಳು ಸೇರಿದಂತೆ 26 ಕುಟುಂಬಗಳಿಗೆ 94ಸಿಸಿ ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ವಸಂತಿ ಬೈಕಾಡಿ, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News