ಪತ್ರಕರ್ತನ ದ್ವಿಚಕ್ರ ವಾಹನ ಕಳವು

Update: 2020-11-24 13:46 GMT

ಪುತ್ತೂರು :  ಸೋಮವಾರ ರಾತ್ರಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನೀಶ್ ಮರೀಲ್ ಎಂಬವರ ದ್ವಿಚಕ್ರ ವಾಹನ ಕಳವಾಗಿದೆ.

ಅನೀಶ್ ಮರೀಲ್ ಅವರು ತನ್ನ ಹೀರೋ ಫ್ಲಜರ್ ಸ್ಕೂಟರನ್ನು ಪುತ್ತೂರು ಮಹಿಳಾ ಠಾಣೆಯ ಬಳಿಯಲ್ಲಿ ನಿಲ್ಲಿಸಿದ್ದು, ಅರ್ಧ ತಾಸಿನ ಬಳಿಕ ವಾಹನ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡುವಾಗ ವಾಹನವನ್ನು ನಕಲಿ ಕೀ ಬಳಸಿಕೊಂಡು ಕಳವು ನಡೆಸಿರುವುದು ಬೆಳಕಿಗೆ ಬಂದಿತ್ತು. 

ಪ್ರಕರಣದ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News