ನೇಪಾಲ ಮೂಲದ ವಾಚ್ಮೆನ್ ಆತ್ಮಹತ್ಯೆ
Update: 2020-11-24 16:18 GMT
ಹಿರಿಯಡ್ಕ, ನ. 24: ಮದ್ಯ ಸೇವನೆ ಚಟ ಹಾಗೂ ಸಾಲದ ಚಿಂತೆಯಲ್ಲಿ ನೇಪಾಳ ಮೂಲದ ವಾಚ್ಮೆನ್ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಪೆರ್ಡೂರು ಮೇಲ್ಪೇಟೆ ಎಂಬಲ್ಲಿ ನ.23ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಪೆರ್ಡೂರು ಮೇಲ್ಪೇಟೆ ಬಾಡಿಗೆ ಮನೆ ನಿವಾಸಿ ಗೋಪಾಲ (54) ಎಂದು ಗುರುತಿಸಲಾಗಿದೆ. ಇವರು ಎರಡನೆ ಮದುವೆಯಾಗಿ ಇಲ್ಲಿಯೇ ವಾಚ್ಮೆನ್ ಹಾಗೂ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಮದ್ಯ ಸೇವನೆ ಮತ್ತು ಸಾಲದ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಅವರು, ಮನೆಯ ಒಳಗಡೆ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.