ಆತ್ಮಹತ್ಯೆಗೆ ಪ್ರಚೋದನೆ ಆರೋಪ : ಐವರ ವಿರುದ್ಧ ಪ್ರಕರಣ

Update: 2020-11-24 16:30 GMT

ಗಂಗೊಳ್ಳಿ, ನ. 24: ಸಾಲ ಕೇಳಲು ಹೋದ ಪತಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಿಪಿಸಿದ ಆರೋಪದಲ್ಲಿ ಐವರ ವಿರುದ್ಧ ಮೈಸೂರು ವಿಜಯ ನಗರದ ಪಲ್ಲವಿ ಪಿ.(38) ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವೀರಭದ್ರೇಶ್ವರ ಸ್ಟೋನ್ ಕ್ರಷರ್ ಮಾಲಕಿ ಪ್ರೇಮ, ಅವರ ಗಂಡ ಕರೀಗೌಡ, ಪೆಟ್ರೋಲ್ ಬಂಕ್ ಮಾಲಕ ಜಿತೇಂದ್ರ ಗೌಡ, ಅವರ ಬಂಧು ಗಳಾದ ಅಶೋಕ್ ಎನ್.ಟಿ, ರಾಜೇಶ್ ಎನ್.ಟಿ ಎಂಬವರು ತನಗೆ ಬಕಬೇಕಾದ ಸಾಲ ಕೇಳಲು ಹೋದ ಪಲ್ಲವಿ ಪತಿ ಮಧು ಎಂ.ಪಿ. ಅವರಿಗೆ ಅವಮಾನಿಸಿ ಹಿಂಸಿ ಹಾಗೂ ಬೆದರಿಕೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದರು ಎಂದು ದೂರಲಾಗಿದೆ.

ಇದೇ ಚಿಂತೆಯಲ್ಲಿ ಮಧು ಮಾನಸಿಕವಾಗಿ ನೊಂದು ಅ.30ರಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೈಸೂರಿನ ವಾಸದ ಮನೆಯಲ್ಲಿ ಹುಡುಕಾಡಿದಾಗ ಮಧು ತನಗೆ ಬರಬೇಕಾಗಿ ರುವ ಸಾಲದ ಬಗ್ಗೆ ಹಾಗೂ ತನ್ನ ಸಾವಿಗೆ ಕಾರಣದ ಬಗ್ಗೆ ಬರೆದಿರುವ ವಿವರಗಳಿರುವ ಪುಸ್ತಕ ದೊರೆತಿದೆ ಎಂದು ಪಲ್ಲವಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News