ಕುಡಿಯುವ ನೀರಿನ ವ್ಯವಸ್ಥೆ : ಆರ್ಯಾಪು ಗ್ರಾಮ ಅಭಿವೃಧ್ಧಿ ಅಧಿಕಾರಿ ನಾಗೇಶ್ ಗೆ ಸನ್ಮಾನ
Update: 2020-11-24 17:18 GMT
ಆರ್ಯಾಪು : ಕುರಿಯ ಗ್ರಾಮದ ಅಜಲಾಡಿ ಪರಿಸರದ ಸುಮಾರು 85 ಮನೆಗೆ ನೀರಿಲ್ಲದೆ ಜನರು ಗಂಭೀರ ಸಮಸ್ಯೆಯನ್ನು ಎದುರಿಸಿದ್ದ ಸಂದರ್ಭ ತಕ್ಷಣ ಜನರ ನೋವಿಗೆ ಸ್ಪಂದಿಸಿ ಬೋರ್ ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಿದ ಆರ್ಯಾಪು ಗ್ರಾಮ ಪಂಚಾಯತ್ ಗ್ರಾಮ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ ಅವರನ್ನು ಯಕೂಬ್ ಸಾಹೇಬ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಕುರಿಯ, ಸಮೀರ್ ಶಾಝ್ ಅಜಲಾಡಿ, ಎಂ. ಅಬ್ದುಲ್ಲಾ ಅಜಲಾಡಿ, ಅಬ್ದುಲ್ ನಝೀರ್ ಕಟ್ಟತ್ತಾರು, ಯಾಕೂಬ್ ಸಾಹೇಬ್ ಕಟ್ಟತ್ತಾರು, ಲ್ಯಾನ್ಸಿ ಡಿಸೋಜ ಅಜಲಾಡಿ, ಅಬ್ದುಲ್ ರಝಾಕ್ (ರಿಕ್ಷಾ) ಅವರು ಗಾಮ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಅವರಿಗೆ ಹೂ ಗುಚ್ಛ ನೀಡಿ ಅಭಿನಂದಿಸಿದರು.