ನ.26 : ಕೃಷ್ಣಮಠದಲ್ಲಿ ತಪ್ತಮುದ್ರಾಧಾರಣೆ

Update: 2020-11-25 14:08 GMT

ಉಡುಪಿ, ನ.25: ಶ್ರೀಕೃಷ್ಣ ಮಠದಲ್ಲಿ ನಾಳೆ ನ.26ರ ಗುರುವಾರ ಏಕಾದಶಿ ಯಂದು ಶ್ರೀಕೃಷ್ಣ ಭಕ್ತರಿಗೆ ತಪ್ತಮುದ್ರಾಧಾರಣ ಕಾರ್ಯಕ್ರಮ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರಿಂದ ನಡೆಯಲಿದೆ.

ಬೆಳಗ್ಗೆ 11 ರಿಂದ ಅಪರಾಹ್ನ 12:30ರವರೆಗೆ ಈ ಮುದ್ರಾಧಾರಣ ಕಾರ್ಯಕ್ರಮವು ರಾಜಾಂಗಣದಲ್ಲಿ ನಡೆಯಲಿದ್ದು, ಭಕ್ತಾದಿಗಳು ಸುರಕ್ಷತಾ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸ್ಯಾನಟೈಸರ್‌ನ್ನು ಉಪಯೋಗಿಸುವ ಮೂಲಕ ಸರಕಾರದ ಎಲ್ಲಾ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿ ಈ ಮುದ್ರಾಧಾರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಕ್ಷ ತುಳಸಿ ಅರ್ಚನೆ: ಅಲ್ಲದೇ ಚಾತುರ್ಮಾಸ ವೃತಾಚರಣೆಯ ಸಮಾಪ್ತಿ ಪ್ರಯುಕ್ತ ಗುರುವಾರ ಏಕಾದಶಿಯಂದು ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ನಡೆಸಲು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಸಂಕಲ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News