ನ.27 : ರಾಜ್ಯಾದ್ಯಂತ ‘ಅರಿಷಡ್ವರ್ಗ’ ಚಲನಚಿತ್ರ ಬಿಡುಗಡೆ

Update: 2020-11-25 17:02 GMT

ಮಂಗಳೂರು, ನ.25: ಅರವಿಂದ್ ಕಾಮತ್ ನಿರ್ದೇಶನದ 'ಅರಿಷಡ್ವರ್ಗ' ಚಲನಚಿತ್ರವು ರಾಜ್ಯಾದ್ಯಂತ ನ.27ಕ್ಕೆ ಬಿಡುಗಡೆಗೊಳ್ಳಲಿದೆ.

ಮನುಷ್ಯನ ‘ಅರಿಷಡ್ವರ್ಗ’ಗಳನ್ನೇ ಕುರಿತು ಮಾಡಲಾದ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಲನಚಿತ್ರ ಇದಾಗಿದೆ. ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಅರಿಷಡ್ವರ್ಗ’ 2019ರಲ್ಲಿ ಲಂಡನ್ ವರ್ಲ್ಡ್ ಪ್ರೀಮಿಯರ್ ಮತ್ತು ಲಂಡನ್ ಭಾರತೀಯ ಚಲನ ಚಿತ್ರೋತ್ಸವದಲ್ಲಿ ಹಾಗೂ ವೆನ್‌ಕವೆರ್ ಅಂತರ್ ‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕನಸು ಟಾಕೀಸ್ ಬ್ಯಾನರ್ ಅಡಿಯಲ್ಲಿ ಆನಂದ್ ಮತ್ತು ಸ್ನೇಹಿತರ ಜೊತೆ ಸೇರಿ ಅರವಿಂದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರದ ವಿಶೇಷ

ಇದರಲ್ಲಿ ಪ್ರಮುಖ ಪಾತ್ರಧಾರಿಗಳು ಎಂದು ಯಾರೂ ಇಲ್ಲ. ಎಲ್ಲರಿಗೂ ಸಮಾನವಾದ ಪಾತ್ರವನ್ನು ನೀಡಿರುವುದು ಚಿತ್ರದ ವಿಶೇಷ. ಈ ಮೂಲಕ ‘ಅರಿಷಡ್ವರ್ಗ’ ಯಶಸ್ವಿಯಾಗಬಹುದೆಂಬುವುದು ನಿರ್ದೇಶಕ ಅರವಿಂದ ಕಾಮತ್‌ರ ಅಭಿಮತ.

ಚಿತ್ರದಲ್ಲಿ ಮಹೇಶ್ ಬುಂಗ್, ನಂದಗೋಪಾಲ, ಸಂಯುಕ್ತ ಹೊರನಾಡು, ಅಂಜು ಆಳ್ವ ನಾಯ್ಕ್, ಅವಿನಾಶ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಮಂಗಳೂರಿನ ಅಂಜು ಆಳ್ವ ನಾಯ್ಕ್: ‘ಅರಿಷಡ್ವರ್ಗ’ ಚಲನಚಿತ್ರದಲ್ಲಿ ನಟಿಸಿರುವ ಅಂಜು ಆಳ್ವ ನಾಯ್ಕ್, ಮಂಗಳೂರಿನ ಖ್ಯಾತ ಉದ್ಯಮಿಯಾಗಿರುವ ಡಾ.ಕೆ.ಸಿ.ನಾಯ್ಕ್ ‌ರ ಸೊಸೆ ಮತ್ತು ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜೀತ್  ನಾಯ್ಕ್ ಅವ‌ರ ಪತ್ನಿ. ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿರುವ ಇವರು ಓರ್ವ ಶಿಕ್ಷಣ ಪ್ರೇಮಿಯೂ ಹೌದು. 2012ರಲ್ಲಿ ಚಲನಚಿತ್ರ ಲೋಕದಲ್ಲಿ ಗುರುತಿಸಿಕೊಂಡಿದ ಅಂಜು ಅವರಿಗೆ ಅಂತರ್ ‌ರಾಷ್ಟ್ರೀಯ ಚಲನಚಿತ್ರ ಪ್ರದರ್ಶನದಲ್ಲಿ ಉತ್ತಮ ನಟಿ ಪ್ರಶಸ್ತಿ ಲಭಿಸಿದೆ. ಅಲ್ಲದೆ ಇವರು ಉತ್ತಮ ಕಥೆ ರಚನಕಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News