ನ. 29 : ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನೆರವು

Update: 2020-11-26 15:57 GMT

ಮಂಗಳೂರು, ನ.26: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಹಾಯ ವಿತರಣೆಯು ನ.29ರಂದು ರವಿವಾರ ಬೆಳಗ್ಗೆ 10:30ಕ್ಕೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ.

ಸುಮಾರು 1.5 ಕೋ.ರೂ. ವೆಚ್ಚದ ಈ ಯೋಜನೆಯಲ್ಲಿ ಕೊರೋನ ಸಂತ್ರಸ್ತರಿಗೆ ಸಹಾಯ, ವೈದ್ಯಕೀಯ ನೆರವು, ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ, ವಸತಿ ರಹಿತರಿಗೆ ಮತ್ತು ವಸತಿ ರಿಪೇರಿಗೆ ಸಹಾಯಧನ, ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ಮುಂತಾದ ಅವಶ್ಯಕತೆಗಳಿಗೆ ಸಹಾಯ ಧನ ವಿತರಿಸಲಾಗುವುದು. ಈ ಸಂದರ್ಭ ಸಮಾಜ ಸೇವಕ, ಒಕ್ಕೂಟದ ನಿರ್ದೇಶಕ, 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಸುಮೋದರ ಡಿ. ಶೆಟ್ಟಿ ಚೆಲ್ಲಡ್ಕ ದಂಪತಿಯನ್ನು ಸನ್ಮಾನಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News