‘ತುಳುನಾಡ ತುತ್ತೈತ ಜೋಕುಲೆನ ಭಾವಚಿತ್ರ ಪಂಥ’ದ ವಿಜೇತರಿಗೆ ಬಹುಮಾನ ವಿತರಣೆ

Update: 2020-11-26 16:00 GMT

ಮಂಗಳೂರು, ನ. 26: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ ರೋಟರಿ ಕ್ಲಬ್ ಮೂಲ್ಕಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ಹಳೆಯಂಗಡಿ ಇದರ ಸಹಕಾರದೊಂದಿಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳ ಮಕ್ಕಳಿಗಾಗಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ‘ತುಳುನಾಡ ತುತ್ತೈತ ಜೋಕುಲೆನ ಭಾವಚಿತ್ರ ಪಂಥ’ದ ಬಹುಮಾನ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಅಕಾಡಮಿಯ ಸಿರಿಚಾವಡಿಯಲ್ಲಿ ನಡೆಯಿತು.

ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್, ರೋಟರಿ ಜಿಲ್ಲೆ ವಲಯ-1ರ ಸಹಾಯಕ ಗವರ್ನರ್ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ಎಂ.ನಾರಾಯಣ್, ಮೂಲ್ಕಿ ರೋಟರಿ ಕ್ಲಬ್‌ನ ಅಧ್ಯಕ್ಷ ಅಶೋಕ್‌ಕುಮಾರ್ ಶೆಟ್ಟಿ, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್. ಬಂಡಿಮಾರ್, ಶ್ರೀಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಇದರ ಅಧ್ಯಕ್ಷ ಸಂತೋಷ್ ದೇವಾಡಿಗ ಅತಿಥಿಗಳಾಗಿ ಭಾಗವಹಿಸಿದ್ದರು. ನೀಮಾ ಹಳೆಯಂಗಡಿ, ಅಕಾಡಮಿಯ ಸದಸ್ಯೆ ಜಯಲಕ್ಷ್ಮಿ ಪಿ.ರೈ, ಯಶೋಧರ ಕೋಟ್ಯಾನ್ ಮತ್ತು ಭಾಗ್ಯವಾನ್ ಸನಿಲ್ ತೀರ್ಪುಗಾರರಾಗಿ ಸಹಕರಿಸಿದ್ದರು.

ಹಳೆಯಂಗಡಿ ತೋಕೂರಿನ ರಶ್ಮಿತಾ-ಹಿವಕರ ದಂಪತಿಯ ಪುತ್ರ ಲತೀಶ್ ಎಚ್. ಕುಮಾರ್ (ಪ್ರಥಮ), ಸುರತ್ಕಲ್ ಸಮೀಪದ ಕುಳಾಯಿಯ ದಿಶಾ ಶಿವಪ್ರಸಾದ್-ಶಿವಪ್ರಸಾದ್ ದಂಪತಿಯ ಪುತ್ರಿ ಯುಕ್ತಿ ಎಸ್. ಪ್ರಸಾದ್ (ದ್ವಿತೀಯ), ಬಾಳ ಗ್ರಾಮದ ರಜಿನಿ-ರಾಜೇಶ ದಂಪತಿಯ ಪುತ್ರಿ ಜಶ್ವಿ ಆರ್.ಕುಲಾಲ್ (ತೃತೀಯ) ಹಾಗೂ ಅಧಿತ್ರಿ ಬೆಳುವಾಯಿ, ಮೋಕ್ಷಿತ ಪಿ.ಎನ್. ತೋಕೂರು, ಸಾಕ್ಷಿ ಉಡುಪಿ, ಕೆ. ಶೌರ್ಯ ಕಾಮತ್ ಉಡುಪಿ ಮತ್ತು ಈಶಾನ್ ಭಟ್ ಉಡುಪಿ ಅವರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ಕಾರ್ಕಳ ಸಮೀಪದ ನುಜೂರು ಪೂವಪ್ಪಮತ್ತು ಲೋಲಾಕ್ಷಿ ದಂಪತಿಯ 7 ವರ್ಷ ಪ್ರಾಯದ ಬಾಲ ಗಾಯಕ ಮಾಸ್ಟರ್ ಕಾರ್ತಿಕ್ ಅವರಿಗೆ ‘ತುಳುವ ಕುರಲ್’ ಬಿರುದು ಪ್ರದಾನ ಮಾಡಲಾಯಿತು. ಕಿರುತೆರ ನಟ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮಾಸ್ಟರ್ ಅಚಿಂತ್ಯ ಅವರನ್ನು ಸನ್ಮಾನಿಸಲಾಯಿತು.

ಅಕಾಡಮಿಯ ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ, ಲೀಲಾಕ್ಷ ಕರ್ಕೇರ, ಕಡಬ ದಿನೇಶ್ ರೈ, ಸಂತೋಷ್ ಪೂಜಾರಿ, ಚೇತಕ್ ಪೂಜಾರಿ ಉಪಸ್ಥಿತರಿದ್ದರು. ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News