ಉಳ್ಳಾಲ : ಶೇಖ್ ಅಬ್ದುಲ್ ಖಾದರ್ ಜೀಲಾನಿ ಅನುಸ್ಮರಣೆ, ಮೌಲೀದ್ ಕಾರ್ಯಕ್ರಮ

Update: 2020-11-27 12:46 GMT

ಉಳ್ಳಾಲ : ಇಲ್ಲಿನ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ಶೇಖ್ ಅಬ್ದುಲ್ ಖಾದರ್ ಜೀಲಾನಿ (ಖ.ಸಿ)ರವರ ಅನುಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಮೌಲೀದ್ ಕಾರ್ಯಕ್ರಮವು ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಅಧ್ಯಕ್ಷತೆ ಯಲ್ಲಿ ಶುಕ್ರವಾರ ನಡೆಯಿತು.

ಸಯ್ಯಿದ್ ಮದ‌ನಿ ಅರಬಿಕ್ ಕಾಲೇಜು ಪ್ರೊ. ಉಸ್ಮಾನುಲ್ ಪೈಝಿ ತೋಡಾರ್ ಉಸ್ತಾದ್ ಸಯ್ಯಿದ್ ಮದನಿ ದರ್ಗಾ  ಝಿಯಾರತ್ ನೆರವೇರಿಸಿದರು. ಪ್ರೊ. ಇಬ್ರಾಹಿಂ ಮದನಿ ಉಸ್ತಾದ್ ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ದರ್ಗಾ ಪ್ರ.ಕಾರ್ಯದರ್ಶಿ  ಮುಹಮ್ಮದ್ ತ್ವಾಹಾ ಹಾಜಿ, ಉಪಾಧ್ಯಕ್ಷ ಯು.ಕೆ. ಮೊನು ಇಸ್ಮಾಯೀಲ್, ಬಾವಾ ಮೊಹಮ್ಮದ್, ಜೊತೆ ಕಾರ್ಯದರ್ಶಿ ನೌಷಾದ್ ಅಲಿ, ಅರೆಬಿಕ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ದವಾ ಕಾಲೇಜು ಪ್ರೊ. ಇಬ್ರಾಹಿಂ ಅಹ್ಸನಿ ,  ಸಮಿತಿ ಸದಸ್ಯರಾದ ಖಾದರ್ ಮುಸ್ಲಿಯಾರ್, ಜಮಾಲ್ ಮೇಲಂಗಡಿ, ಇಬ್ರಾಹೀಮ್ ಹಾಜಿ ಉಳ್ಳಾಲಬೈಲು, ಯೂಸುಫ್ ಸಿದ್ದೀಕ್ ಕೋಟೆಪುರ, ಯು.ಕೆ ಹನೀಫ್ ಮಾರ್ಗತಲೆ, ಕೆ.ಪಿ ನಝೀರ್, ಮೊಯ್ದಿನಬ್ಬ, ಮುಫತ್ತಿಸ್ ಹನೀಫ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News