ದೇಶದ್ರೋಹಿಗಳನ್ನು ಕೂಡಲೇ ಬಂಧಿಸಿ : ಮಿಥುನ್ ರೈ

Update: 2020-11-27 13:01 GMT

ಮಂಗಳೂರು, ನ. 27: ನಗರದ ಬಿಜೈ-ಕೆಪಿಟಿ ರಸ್ತೆಯ ಅಪಾರ್ಟ್‌ವೊಂದರ ಕಂಪೌಂಡ್‌ನಲ್ಲಿ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಬರಹಗಳು ಕಂಡು ಬಂದಿದ್ದು, ಇದು ಖಂಡನೀಯ. ಇಂತಹ ದೇಶದ್ರೋಹಿ ಕೃತ್ಯದಲ್ಲಿ ತೊಡಗಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದ್ದಾರೆ.

ಲಷ್ಕರ್ ಮತ್ತು ತಾಲಿಬಾನ್ ಉಗ್ರಗಾಮಿಗಳನ್ನು ಬೆಂಬಲಿಸುವ ಈ ಬರಹ ನಿಜಕ್ಕೂ ದೇಶದ ಆಂತರಿಕ ಭದ್ರತೆಗೆವೊಡ್ಡಿದ ಸವಾಲಾಗಿದೆ. ದೇಶದೊಳಗಿದ್ದು, ಈ ದೇಶದ ಅನ್ನ ತಿಂದು ಈ ರೀತಿ ಬರಹ ಮುಖೇನ ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಇಂತಹವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದರು.

ಜಾತ್ಯತೀತ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಉಗ್ರ ಸಂಘಟನೆಗಳನ್ನು ಬೆಂಬಲಿಸಿ ಸಮಾಜವನ್ನು ಒಡೆಯುವ ಈ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಇದರಿಂದ ಜಾತಿ ಜಾತಿ, ಸಮಾಜವನ್ನು ಒಡೆಯುವ ಕೃತ್ಯವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News