ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವಶಂಕರ ನಾಮಕರಣಕ್ಕೆ ವಜ್ರದೇಹಿ ಆಗ್ರಹ
Update: 2020-11-27 13:04 GMT
ಮಂಗಳೂರು, ನ.27: ಜಗತ್ನ ಪ್ರಸಿದ್ಧ ದಾರ್ಶನಿಕರು, ಮೇರುಗುರುಗಳಾದ ಶ್ರೀ ಮಧ್ವಾಚಾರ್ಯ ಮತ್ತು ಶ್ರೀ ಶಂಕರಾಚಾರ್ಯ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಡುವಂತೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಗ್ರಹ ವ್ಯಕ್ತಪಡಿಸಿದ್ದಾರೆ.
ಉತ್ತರ ಭಾರತ ದೇವರು, ದೇವತೆಗಳ ಅವತಾರ ಭೂಮಿಯಾಗಿದ್ದು, ಉತ್ತರ ಪ್ರದೇಶದಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣವಿದೆ. ದಕ್ಷಿಣ ಭಾರತ ಆಚಾರ್ಯರು, ಗುರುಗಳ ಪುಣ್ಯಸ್ಥಾನ. ಈ ಕಾರಣದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವಶಂಕರ ನಾಮಕರಣ ಮಾಡಬೇಕು. ಭಾರತವನ್ನು ಇಡೀ ಜಗತ್ತು ವಿಶ್ವಗುರುವಾಗಿ ಕಾಣುತ್ತಿದ್ದುಘಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಹೆಸರಿಟ್ಟರೆ ಪೂರಕವಾಗಲಿದೆ ಎಂದು ವಜ್ರದೇಹಿ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.