‘ಪ್ರತಿಭಟನೆ ಕೈಬಿಡಿ’: ಮಾತುಕತೆಗೆ ರೈತರನ್ನು ಆಹ್ವಾನಿಸಿದ ಕೇಂದ್ರ ಸರಕಾರ

Update: 2020-11-27 14:45 GMT

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗಳನ್ನು ಕೊನೆಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದು, ಮುಂದಿನ ವಾರ ರೈತ ಮುಖಂಡರನ್ನು ಮಾತುಕತೆಗಾಗಿ ಆಹ್ವಾನಿಸಿದ್ದಾರೆ.

“ಸಮಸ್ಯೆಗಳ ಬಗ್ಗೆ ರೈತರ ಜೊತೆ ಚರ್ಚಿಸಲು ಸರಕಾರ ಯಾವಾಗಲೂ ಸಿದ್ಧವಾಗಿತ್ತು. ನಾವು ರೈತರನ್ನು ಆಹ್ವಾನಿಸುತ್ತೇವೆ” ಎಂದಿರುವ ಅವರು ಡಿಸೆಂಬರ್ 3ರಂದು ಮಾತುಕತೆಗೆ ದಿನ ನಿಗದಿ ಮಾಡಿದ್ದಾರೆ.

ಎರಡು ದಿನಗಳ ಪ್ರತಿಭಟನೆಯ ನಂತರ ಇಂದು ರೈತರು ದಿಲ್ಲಿ ಪ್ರವೇಶಿಸಲು ಅನುಮತಿ ಲಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News