ತಾತ್ಕಾಲಿಕ ಜೈಲುಗಳಾಗಿ ಕ್ರೀಡಾಂಗಣಗಳು: ಪೊಲೀಸ್ ಮನವಿಗೆ ದಿಲ್ಲಿ ಸರಕಾರದ ನಕಾರ

Update: 2020-11-27 16:22 GMT

ಹೊಸದಿಲ್ಲಿ,ನ.27: ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿಯ ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸಲು ಪೊಲೀಸರ ಮನವಿಯನ್ನು ಆಪ್ ಸರಕಾರವು ತಿರಸ್ಕರಿಸಿದೆ.

ರೈತರ ಬೇಡಿಕೆಗಳು ಸಮರ್ಥನೀಯವಾಗಿವೆ. ಕೇಂದ್ರ ಸರಕಾರವು ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. ಶಾಂತಿಯುತ ಪ್ರತಿಭಟನೆಯನ್ನು ನಡೆಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಸಾಂವಿಧಾನಿಕ ಹಕ್ಕು ಆಗಿದೆ ಮತ್ತು ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವುದಕ್ಕಾಗಿ ರೈತರನ್ನು ಜೈಲಿಗೆ ತಳ್ಳಬಾರದು ಮತ್ತು ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸಲು ದಿಲ್ಲಿ ಸರಕಾರವು ಅವಕಾಶವನ್ನು ನೀಡುವುದಿಲ್ಲ ಎಂದು ದಿಲ್ಲಿ ಗೃಹಸಚಿವ ಸತ್ಯೇಂದ್ರ ಜೈನ್ ಅವರು ದಿಲ್ಲಿ ಪೊಲೀಸರ ಮನವಿಗೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News