ನ. 29: ಯಕ್ಷಾಂಗಣದಿಂದ ಹಿರಿಯ ಕಲಾವಿದರ ಸಂಸ್ಮರಣೆ

Update: 2020-11-27 16:59 GMT

ಮಂಗಳೂರು, ನ.27: ಯಕ್ಷಾಂಗಣ ಮಂಗಳೂರುಮ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಆಶ್ರಯದಲ್ಲಿ ನ.29ರಂದು ಶಕ್ತಿನಗರ ಶ್ರೀಗೋಪಾಲಕೃಷ್ಣ ದೇವಸ್ಥಾನದ ನೂತನ ಪಾರಿಜಾತ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಪರ್ವ’ ಎಂಟನೇ ವರ್ಷದ ನುಡಿಹಬ್ಬ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಯಕ್ಷಗಾನ ಹಾಸ್ಯ ಪಟು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜ್ಞಾನ-ವಿಜ್ಞಾನ ಪ್ರಶಸ್ತಿ ಪುರಸ್ಕೃತ ದಿ. ಬೆಟ್ಟಂಪಾಡಿ ಬಾಳಪ್ಪಶೆಟ್ಟಿ, ಹಿರಿಯ ಯಕ್ಷಗಾನ ಅರ್ಥಧಾರಿ ದಿ.ಎ.ಕೆ. ನಾರಾಯಣಶೆಟ್ಟಿ, ಅರ್ಥಧಾರಿ-ಸಂಘಟಕ ಎ.ಕೆ. ಮಹಾಬಲ ಶೆಟ್ಟಿ ಅವರರಿಗೆ ನುಡಿನಮನ ಸಲ್ಲಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News