ಕೇಸರಿನಗರ ಮಾಡುವ ಹವಣಿಕೆ : ರಿಯಾಝ್ ಫರಂಗಿಪೇಟೆ
Update: 2020-11-27 17:03 GMT
ಮಂಗಳೂರು, ನ.27: ನಗರದಲ್ಲಿ ಲಷ್ಕರ್ ಹೆಸರಲ್ಲಿ ಪ್ರತ್ಯಕ್ಷಗೊಂಡಿರುವ ಗೋಡೆಬರಹವು ಕರಾವಳಿ ನಗರವನ್ನು ಕೇಸರಿ ನಗರ ಮಾಡಲು ಪದೇ ಪದೇ ಹವಣಿಸುತ್ತಿರುವುದರ ಭಾಗವಾಗಿದೆ ಎಂದು ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ತಿಳಿಸಿದ್ದಾರೆ.
ಎನ್ಐಎ, ಎಟಿಎಸ್, ಇಡಿ, ಸಿಬಿಐ ಸಹಿತ ಎಲ್ಲ ತನಿಖಾ ಸಂಸ್ಥೆಗಳು ಕೂಡಲೇ ಮಂಗಳೂರಿಗೆ ದೌಡಾಯಿಸಬೇಕು. ಆರೆಸ್ಸೆಸ್ ನಾಯಕರನ್ನು ತನಿಖೆಗೆ ಒಳಪಡಿಸಬೇಕಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.