ನ.27: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-11-27 17:04 GMT

ಮಂಗಳೂರು, ನ.27: ನೆಹರೂಮೈದಾನ 33/11 ಕೆ.ವಿ. ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬಿಇಎಂ ಪೀಟರ್‌ನಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದ್ದರಿಂದ ನ.29ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಇದರಿಂದ ಬಂದರ್ ಪೊಲೀಸ್ ಸ್ಟೇಷನ್, ಬಾಂಬೆ ಲಕ್ಕಿ ಹೋಟೆಲ್, ಅಜೀಜುದ್ದಿನ್ ರಸ್ತೆ, ಭಟ್ಕಳ ಬಝಾರ್, ಅನ್ಸಾರಿ ರಸ್ತೆ, ಕಂಡತ್ತ್‌ಪಳ್ಳಿ, ಚೇಂಬರ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News