ನಕ್ಸಲರಿಂದ ಐಇಡಿ ಸ್ಫೋಟ : ಸಿಆರ್‌ಪಿಎಫ್ ಅಧಿಕಾರಿ ಬಲಿ

Update: 2020-11-29 03:40 GMT

ರಾಯಪುರ : ಮಾವೋವಾದಿಗಳು ಸುಕ್ಮಾ ಜಿಲ್ಲೆಯ ತಲ್ಮೇತಲ ಎಂಬಲ್ಲಿ ಶನಿವಾರ ರಾತ್ರಿ ನಡೆಸಿದ ಐಇಡಿ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಕೋಬ್ರಾ ತಂಡದ (ಕಮಾಂಡೊ ಬೆಟಾಲಿಯನ್ ಫಾರ್ ರೆಸೊಲ್ಯೂಸ್ ಆ್ಯಕ್ಷನ್) ಸಹಾಯಕ ಕಮಾಂಡಂಟ್ ಪ್ರಾಣ ಕಳೆದುಕೊಂಡಿದ್ದಾರೆ.

ನಕ್ಸಲ್ ನಿಗ್ರಹ ಕಾರ್ಯಾಚರಣೆಗಾಗಿ ಶನಿವಾರ ತಡರಾತ್ರಿ ಎಂಟು ಮಂದಿ ಕೋಬ್ರಾ ಪಡೆ ಸಿಬ್ಬಂದಿ ತೆರಳಿದ್ದರು ಎಂದು ಬಸ್ತರ್ ಐಜಿ ಸುಂದೆರಾಜ್ ಪಿ. ಹೇಳಿದ್ದಾರೆ.

ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಎಲ್ಲ ಎಂಟು ಮಂದಿ ಗಾಯಾಳುಗಳನ್ನು ಮಧ್ಯರಾತ್ರಿ 12.45ರ ಸುಮಾರಿಗೆ ರಾಯಪುರಕ್ಕೆ ವಿಮಾನದಲ್ಲಿ ಕರೆದೊಯ್ಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿವಾರ ಬೆಳಗ್ಗೆ ಸಹಾಯಕ ಕಮಾಂಡೆಂಟ್ ನಿತಿನ್ ಭಲ್ಹೇರೊ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ವಿವರ ನೀಡಿದ್ದಾರೆ. ಉಳಿದ ಏಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News