‘ನಾ ಕಂಡ ಜವು ಇಂತಿಹುದಯ್ಯ’ ಕೃತಿ ಬಿಡುಗಡೆ
Update: 2020-11-29 14:41 GMT
ಉಡುಪಿ, ನ.29: ಕವಯತ್ರಿ ವಾಸಂತಿ ಅಂಬಲಪಾಡಿ ಬರೆದ ‘ನಾ ಕಂಡ ಜಗವು ಇಂತಿಹುದಯ್ಯಿ’ ಆಧುನಿಕ ವಚನಗಳ ಪುಸ್ತಕವನ್ನು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಪಣಿಯಾಡಿ ಶ್ರೀಅನಂತಾಸನ ಶ್ರೀಲಕ್ಷ್ಮಿ ಪದ್ಮನಾಭ ದೇವಸ್ಥಾನದಲ್ಲಿ ಶುಕ್ರವಾರ ಬಿಡುಗಡೆಗೋಳಿಸಿದರು.
ಮಠದ ದಿವಾನ ನಾಗರಾಜ ಆಚಾರ್ಯ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ, ಲೇಖಕಿ ಅತ್ತೆ ಬೇಬಿ ಜತ್ತನ್, ಲೇಖಕಿ ವಾಸಂತಿ ಅಂಬಲಪಾಡಿ ಉಪಸ್ಥಿತರದ್ದರು. ಉಪನ್ಯಾಸಕ ದಯಾನಂದ ಉಗ್ಗೆಲ್ಬೆಟ್ಟು ಕೃತಿ ಪರಿಚಯ ಮಾಡಿದರು. ಮಹಿತೋಷ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.