ಉಗ್ರರನ್ನು ಹತ್ತಿಕ್ಕುವಲ್ಲಿ ಸರಕಾರ ವಿಫಲ: ಸಿಪಿಎಂ ಆರೋಪ

Update: 2020-11-29 15:16 GMT

ಮಂಗಳೂರು, ನ. 29: ರಾಜ್ಯದಲ್ಲಿ ಅಶಾಂತಿ ಮೂಡಿಸುವ ಹುನ್ನಾರದ ಭಾಗವಾಗಿ ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಗ್ರರ ಪರ ಗೋಡೆ ಬರಹವನ್ನು ಬರೆದಿರುವುದು ಖಂಡನೀಯ. ಈ ರೀತಿಯ ಬಹಿರಂಗ ಬರಹಗಳು ಬಿಜೆಪಿ ಸರಕಾರದ ಆಡಳಿತ ವೈಫಲ್ಯವನ್ನು ತೋರಿಸಿದೆ ಎಂದು ಸಿಪಿಎಂ ಆರೋಪಿಸಿದೆ.

ಪೊಲೀಸ್ ಇಲಾಖೆಯ ನಿಷ್ಕ್ರಿಯತೆ ಅಥವಾ ದಿವ್ಯ ಮೌನವನ್ನು ಸಾಬೀತು ಪಡಿಸಿದೆ. ಈ ರೀತಿಯ ಗೋಡೆ ಬರಹಗಳನ್ನೇ ವೈಭೀಕರಿಸಿ ಕೋಮುವಾದಿ ಶಕ್ತಿಗಳು ಸಮಾಜವನ್ನು ಇನ್ನಷ್ಟು ಒಡೆದು ಆಳಲು ಕುತಂತ್ರಗಳನ್ನು ನಡೆಸುವ ಸಾಧ್ಯತೆಗಳು ಕೂಡಾ ಇದೆ. ನಾಗರಿಕ ಸಮಾಜದ ಅಶಾಂತಿಗೆ ಕಾರಣವಾಗುವ ಈ ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಸಂತ ಆಚಾರಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News