ಜೂಜಾಟ: 12 ಆರೋಪಿಗಳ ಬಂಧನ

Update: 2020-11-30 16:10 GMT

ಮಂಗಳೂರು, ನ.30: ಕಾವೂರು ಕಟ್ಟೆಯ ಕಟ್ಟಿಗೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ 12 ಮಂದಿಯನ್ನು ಕಾವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ನಿವಾಸಿಗಳಾದ ಸುರೇಶ್ (36), ಬಸವರಾಜ್ (26), ಆತ್ಮಾನಂದ (23), ಯಮುನಪ್ಪ ಮೈಲಾರಿ (30) ಪರಶುರಾಮ (24), ಶಮಿತ್ ಸಾಬ್ (22), ಷಣ್ಮುಗ (23), ಮಂಜುನಾಥ (25), ಹನುಮಂತ (29), ವಿಜಯ್ (41), ನವೀನ್ (36), ನಿಂಗಪ್ಪ (21) ಬಂಧಿತರು.

ರವಿವಾರ ಸಂಜೆ 4 ಗಂಟೆ ವೇಳೆ ಪೊಲೀಸರು ರೌಂಡ್ಸ್‌ನಲ್ಲಿದ್ದಾಗ ಜೂಜಾಟ ಆಡುತ್ತಿರುವುದು ಕಂಡು ಬಂದಿದೆ. ಜೂಜಾಟದಲ್ಲಿ ಪಣವಾಗಿ ಇಡಲಾಗಿದ್ದ 5,180 ರೂ. ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News