ಯುವಕನ ಬಂಧನ: 750 ಗ್ರಾಂ. ಗಾಂಜಾ ವಶ

Update: 2020-12-01 12:49 GMT

ಬೆಳ್ತಂಗಡಿ: ‘ಧರ್ಮಸ್ಥಳ ಗ್ರಾಮದ ಹೊಸ ಕೆ.ಎಸ್.ಆರ್.ಟಿ.ಸಿ ಬಸ್ಸು ತಂಗುದಾಣದ ಬಳಿ ಅನುಮಾನಸ್ಪದದಿಂದ ಓಡಾಡುತ್ತಿದ್ದ ಯುವಕನೋರ್ವನನ್ನು ಬಂಧಿಸಿ 750  ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಧರ್ಮಸ್ಥಳ ಪೊಸೊಳಿಕೆ ನಿವಾಸಿ ಮಂಜು ಯಾನೆ ಮಂಜುನಾಥ ( 29) ಎಂಬಾತನಾಗಿದ್ದಾನೆ.

‘ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷ ಚಂದ್ರಶೇಖರ ಕೆ. ಹಾಗೂ ಸಿಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಂರ್ಭ ಬಸ್ಸು ಪಾರ್ಕಿಂಗ್ ಜಾಗದಲ್ಲಿ ಮಂಜುನಾಥನನ್ನು ಗಮನಿಸಿ ಅನುಮಾನಗೊಂಡು ಪ್ರಶ್ನಿಸಿದಾಗ ಓಡಲು ಪ್ರಯತ್ನಿಸಿದ್ದಾನೆ. ತಕ್ಷಣ ಬಂಧಿಸಿ ಆತನ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ಗಿಡದ ಗೆಲ್ಲು, ಗಾಂಜಾ ಮೊಗ್ಗುಗಳು, ಎಲೆ, ಬೀಜಗಳು ಕಂಡು ಬಂದಿದೆ.

ಒಟ್ಟು 750  ಗ್ರಾಂ ಗಾಂಜಾ ಗೆಲ್ಲು, ಎಲೆ, ಹೂವು ಮತ್ತು ಬೀಜ ಇದ್ದು ಇದರ ಅಂದಾಜು ಮೌಲ್ಯ  ರೂ 15000 ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News