ತಾಜುಲ್ ಉಲಮಾ ಅನುಸ್ಮರಣಾ ಸಂಗಮ

Update: 2020-12-01 12:29 GMT

ಉಳ್ಳಾಲ : ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿಯ ವತಿಯಿಂದ ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಳ್ಳಾಲ ತಂಙಳ್ ಅವರ ಏಳನೇ ವರ್ಷದ ಅನುಸ್ಮರಣೆ ಹಾಗೂ ಮದನೀಸ್ ಸದಸ್ಯತ್ವ ಅಭಿಯಾನ ಉದ್ಘಾಟನೆ  ಮುಡಿಪು ತಾಜುಲ್ ಉಲಮಾ ಶರೀಅತ್ ಕಾಲೇಜ್ ಸಭಾಂಗಣದಲ್ಲಿ  ನಡೆಯಿತು.

ಮುರ ಸಯ್ಯಿದ್ ಸಿದ್ದೀಕ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಪ್ರಯುಕ್ತ  ಜಲಾಲಿಯ್ಯಾ ರಾತೀಬ್ ಸಯ್ಯಿದ್ ಬದ್ರುದ್ದೀನ್ ತಂಙಳ್ ಮದನಿ ಪೊಮ್ಮಾಜೆ  ನೇತೃತ್ವದಲ್ಲಿ ನಡೆಯಿತು. ಉಜಿರೆ ಸಯ್ಯಿದ್ ಇಸ್ಮಾಯಿಲ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಜೂರು ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಅನುಸ್ಮರಣಾ ಭಾಷಣ ನಡೆಸಿದರು.

ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೆರವೇರಿಸಿದರು. ವೇದಿಕೆಯಲ್ಲಿ ಸಯ್ಯಿದ್ ಅಬ್ದುಸ್ಸಲಾಂ ತಂಙಳ್ ಮದನಿ, ಸಯ್ಯಿದ್ ಬದ್ರುದ್ದೀನ್ ತಂಙಳ್ ಮದನಿ, ಅಬ್ದುರ್ರಝಾಕ್ ಮದನಿ ಬಜ್ಪೆ, ಹೈದರ್ ಮದನಿ ಕರಾಯ, ಖಾಸಿಂ ಮದನಿ ಕರಾಯ, ಬಾಳೆಪುಣಿ ಅಲೀ ಫೈಝೀ, ವಿಟ್ಲ ಅಬೂಬಕರ್ ಸುನ್ನೀ ಫೈಝೀ, ಉಡುಪಿ ಸಹಾಯಕ ಖಾಝಿ ಮೂಳೂರು ಅಬ್ದುರ್ರಹ್ಮಾನ್ ಮದನಿ, ಮೊರೋಕ್ಕೋ ಮದನಿ, ಪಿ. ಎಸ್. ಇಬ್ರಾಹಿಂ ಮದನಿ ತುರ್ಕಳಿಕೆ, ಕುತ್ತಾರು ಸಲೀಂ ಹಾಜಿ, ಕಂಬಳ ಬೆಟ್ಟು ಇಬ್ರಾಹೀಂ ಮದನಿ, ಆಸಿಫ್ ಸಖಾಫಿ ಮುಡಿಪು, ಯು. ಕೆ. ಅಬೂಬಕರ್ ಮದನಿ ಮುದುಂಗಾರು, ಮುಫತ್ತಿಶ್ ಅಬ್ದುಲ್ ಹಮೀದ್ ಮದನಿ, ಮುಫತ್ತಿಶ್ ಸಿದ್ದೀಖ್ ಮದನಿ, ಬಶೀರ್ ಮದನಿ ಕೂಳೂರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿದರು. ಬಂಡಾಡಿ ಅಬ್ಬಾಸ್ ಮದನಿ ವಂದಿಸಿದರು. ಆರ್. ಕೆ. ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News