ಮೀನು ಮಾರಾಟ ಸ್ಥಗಿತಗೊಳಿಸಿ ಮೀನುಗಾರರಿಂದ ಶೋಕಾಚರಣೆ

Update: 2020-12-02 10:31 GMT

ಮಂಗಳೂರು : ಮೀನುಗಾರಿಕೆಗೆ ತೆರಳಿದ ಪರ್ಸೀನ್ ಬೋಟ್ ಮಗುಚಿದ ಪರಿಣಾಮ ನಾಲ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಬುಧವಾರ ಮಂಗಳೂರಿನಲ್ಲಿ ಮೀನುಗಾರಿಕೆ  ಮೀನು ಮಾರಾಟ ಸ್ಥಗಿತಗೊಳಿಸಿ ಶೋಕಾ ಚರಿಸಲಾಯಿತು.

ನಗರದ ಪ್ರಮುಖ ಮೀನು ಮಾರು ಕಟ್ಟೆಯಾದ ಸ್ಟೇಟ್ ಬ್ಯಾಂಕ್ ಬಳಿಯ ಫಿಶ್ ಮಾರ್ಕೆಟ್ ನಲ್ಲಿ ಬುಧವಾರ ಮೀನು ಮಾರಾಟ  ಸ್ಥಗಿತಗೊಂಡಿತ್ತು. ಬಿಜೈ, ಉರ್ವ, ಅಳಕೆ ಮೀನು ಮಾರುಕಟ್ಟೆ ಗಳಲ್ಲಿ ಕೂಡ ಮೀನುಗಾರರು ಬಂದ್ ಆಚರಿಸಿದರು. ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡದೆ ಮೀನುಮಾರಾಟ ಗಾರರು ಶೋಕಾಚರಿಸಿದರು.

ಪರ್ಸೀನ್ ಬೋಟ್ ಮಗುಚಿದ ಪರಿಣಾಮ 6 ಮಂದಿ ಮೀನುಗಾರರು ನಾಪತ್ತೆಯಾ ಗಿದ್ದರು. ನಿನ್ನೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇಂದು ಮೂವರ ಮೃತದೇಹ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News