ನೇಣುಬಿಗಿದು ಯುವಕ ಆತ್ಮಹತ್ಯೆ

Update: 2020-12-03 15:20 GMT

ಪಡುಬಿದ್ರಿ, ಡಿ.3: ಯಾವುದೋ ಕಾರಣದಿಂದ ಮನನೊಂದ ಯುವಕನೊಬ್ಬ ಮನೆಯ ಸಮೀಪದ ರಸ್ತೆ ಬದಿಯಲ್ಲಿರುವ ಗೇರುಮರದ ಕೊಂಬೆಗೆ ಹಗ್ಗಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲೂರು ಗ್ರಾಮದ ಕೆಮ್ಮುಂಡೇಲು ಉಳ್ಳೂರು ಎಂಬಲ್ಲಿಂದ ವರದಿಯಾಗಿದೆ.

ಇಲ್ಲಿನ ಮಂಜುನಾಥ ಆಚಾರ್ಯ ಎಂಬವರ ಪುತ್ರ ಶಿವಾನಂದ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ ಡಿ.2ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದು ಬಳಿಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿ ಮನೆಗೆ ಮರಳಿ ಊಟ ಮಾಡಿ ರಾತ್ರಿ 9:30ಕ್ಕೆ ಮಲಗುವ ಕೋಣೆಗೆ ಹೋಗಿದ್ದ. ಆದರೆ ಬೆಳಗ್ಗೆ ಕೋಣೆಯಲ್ಲಿ ಕಾಣಿಸದೇ ಇದ್ದಾಗ ಮನೆಯವರು ಹುಡುಕಾಡಿದಾಗ ಮನೆಯ ಸಮೀಪ ರಸ್ತೆ ಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಯಿತು.

ಈ ಬಗ್ಗೆ ಪಡುಬದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News