ಯುನಿವೆಫ್: ಡಿ.4ರಂದು ಸೀರತ್ ಕಾರ್ಯಕ್ರಮ

Update: 2020-12-03 16:25 GMT

ಮಂಗಳೂರು : ಯುನಿವೆಫ್ ಕರ್ನಾಟಕ ನ. 27 ರಿಂದ  2021 ರ ಜ.29 ರ ವರೆಗೆ "ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ  ಉಳ್ಳಾಲ ಶಾಖೆಯ ವತಿಯಿಂದ  ಡಿ. 4 ರ  ರಾತ್ರಿ 8 ಗಂಟೆಗೆ  ಮುಕ್ಕಚ್ಚೇರಿಯ ನಿಮ್ರಾ ಮಸೀದಿಯಲ್ಲಿ ಸೀರತ್ ಕಾರ್ಯಕ್ರಮ ನಡೆಯಲಿದೆ.

"ವಿರಮಿಸದ ಪ್ರವಾದಿ(ಸ)' ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಉಪನ್ಯಾಸ  ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News