‘ಜಾನಪದ ಸಂಶೋಧಕ- ಸಮಾಜಯೋಗಿ ಡಾ. ಕನರಾಡಿ ವಾದಿರಾಜ ಭಟ್’ ಕೃತಿ ಬಿಡುಗಡೆ

Update: 2020-12-04 09:00 GMT

ಮಂಗಳೂರು, ಡಿ. 4: ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಗ್ರಂಥ ಮಾಲೆಗಾಗಿ ಮಂಗಳೂರು ಸಂತ ಆ್ಯಗ್ನೆಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ, ಪ್ರಾಧಯಾಪಕ ಡಾ. ಸಂಪೂರ್ಣಾನಂದ ಬಳ್ಕೂರು ಬರೆದಿರುವ ‘ಜಾನಪದ ಸಂಶೋಧಕ- ಸಮಾಜಯೋಗಿ ಡಾ. ಕನರಾಡಿ ವಾದಿರಾಜ ಭಟ್’ ಕೃತಿ ಇಂದು ಬಿಡುಗಡೆಗೊಂಡಿತು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ರಥಬೀದಿಯ ಡಾ. ಪಿ. ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಕೃತಿ ಬಿಡುಗಡೆಗೊಳಿಸಿದರು.

ಸಂತ ಆ್ಯಗ್ನೆಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲೆ ಡಾ. ಸಿಸ್ಟರ್ ಎಂ. ವೆನಿಸ್ಸಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ರಿಜಿಸ್ಟ್ರಾರ್ ಹಾಗೂ ಕನ್ನಡ ಸಂಘದ ಪೋಷಕ ಪ್ರೊ. ಚಾರ್ಲ್ಸ್ ಸ್ಟಾನಿ ಪಾಯ್ಸಾ, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘದ ಸಂಚಾಲಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್‌ಚಂದ್ರ ಶಿಶಿಲ, ಲೇಖಕ ಡಾ. ಸಂಪೂರ್ಣಾನಂದ ಬಳೂ್ಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News