ಡಿ.5ರಂದು ಎಸ್‌ಕೆಡಿಆರ್‌ಡಿಪಿಯಿಂದ ಸಾಧನಾ ಸಮಾವೇಶ

Update: 2020-12-04 13:44 GMT

ಉಡುಪಿ, ಡಿ.4: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘ ಗಳ ಒಕ್ಕೂಟ ಅಂಬಾಗಿಲು ವಲಯ ಇವರ ಸಹಯೋಗದೊಂದಿಗೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರ ಸಾಧನಾ ಸಮಾವೇಶ ನಾಳೆ ಉಡುಪಿ ಅಂಬಾಗಿಲು ಪುತ್ತೂರಿನ ಶ್ರೀಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.

ಬೆಳಗ್ಗೆ 10:30ಕ್ಕೆ ನಡೆಯುವ ಸಮಾವೇಶದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವಉದ್ಯೋಗಕ್ಕೆ ಪೂರಕವಾಗಿ ದ್ವಿಚಕ್ರ ವಾಹನಗಳ ವಿತರಣೆ ಹಾಗೂ ಹಸಿರು ಇಂಧನ ಸಾಧನಗಳ ವಿತರಣೆ ನಡೆಯಲಿದೆ.

ಸಾಧನಾ ಸಮಾವೇಶವನ್ನು ರಾಜ್ಯ ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಪ್ರಗತಿ ಬಂಧ ಸ್ವಸಹಾಯ ಸಂಘಗಳ ಒಕ್ಕೂಟ ಪುತ್ತೂರು ಬಿ ಅಧ್ಯಕ್ಷೆ ಶಾಂತಿ ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ ದ್ವಿಚಕ್ರ ವಾಹನಗಳ ಕೀ ಹಸ್ತಾಂತರಿಸಿದರೆ, ಬ್ಯಾಂಕ್ ಆಫ್ ಬರೋಡದ ರೀಜನಲ್ ಮ್ಯಾನೇಜರ್ ರವಿ ಎಚ್.ಜಿ. ಹಸಿರು ಇಂಧನ ಸಾಧನಗಳನ್ನು ವಿತರಿಸುವರು ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News