ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರೆ ‘ಜಾನಪದ ಸಿರಿ’ ಪ್ರಶಸ್ತಿ ಪ್ರದಾನ

Update: 2020-12-04 14:24 GMT

ಶಿರ್ವ, ಡಿ.4: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಕಾಪು ತಾಲೂಕು ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ತುಳು ಜಾನಪದ ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರ ಮೂಡಬೆಟ್ಟು ಕಟಪಾಡಿ ಅವರಿಗೆ ಗುರುವಾರ ಕಟಪಾಡಿ ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ ದಲ್ಲಿ ಜಾನಪದ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಪ್ರಾಚೀನವಾದ ಜಾನಪದ ಕಲೆಗಳು, ಆಚರಣೆಗಳು, ಜನಪದ ನಂಬಿಕೆಗಳು ಹಳ್ಳಿ ಜನರ ಬದುಕಿನೊಂದಿಗೆ ಹಾಸು ಹೊಕ್ಕಾಗಿದೆ. ಅನೇಕ ಬಗೆಯ ಜಾನಪದ ವೌಖಿಕ ಸಾಹಿತ್ಯ ಕಲೆಗಳು ನಶಿಸಿ ಹೋಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಜನಪದ ಸಾಹಿತ್ಯ ಕಲೆಗಳ ದಾಖಲೀ ಕರಣ ಅಗತ್ಯವಾಗಿ ಆಗಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂದ ಸಂಚಾಲಕ ಕೆ.ಸತ್ಯೇಂದ್ರ ಪೈ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಖಾರಾಮ್ ಹಾವಂಜೆ ಮಾತನಾಡಿದರು. ಈ ಸಂದರ್ಭದಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆ ಯಾದ ಪರಿಷತ್ ಮಾಧ್ಯಮ ಕಾರ್ಯದರ್ಶಿ ರಾಕೇಶ್ ಕುಂಜೂರು ಅವರನ್ನು ಸನ್ಮಾನಿಸಲಾಯಿತು.

ಪರಿಷತ್ ಕಾಪು ತಾಲೂಕು ಕೋಶಾಧಿಕಾರಿ ಕೆ.ನಾಗೇಶ್ ಕಾಮತ್, ಜೊತೆ ಕಾರ್ಯದರ್ಶಿ ಪವಿತ್ರಾ ಆರ್.ಶೆಟ್ಟಿ ಉಪಸ್ಥಿತರಿದ್ದರು. ಪರಿಷತ್ ಕಾಪು ತಾಲೂಕು ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭುವನೇಶ್ ಪ್ರಭು ವಂದಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ರ್ವಾಲು ಕಾರ್ಯಕ್ರಮ ನಿರೂಪಿಸಿದರು.

ಕನಕ ಜಯಂತಿ ಆಚರಣೆ ಅಂಗವಾಗಿ ಕನಕದಾಸರ ಗೀತೆಗಾಯನ ಕಾರ್ಯ ಕ್ರಮದಲ್ಲಿ ಸಂಗೀತ ಕಲಾವಿದರಾದ ಸಖಾರಾಮ್ ಹಾವಂಜೆ, ನಾರಾಯಣ ಮೂರ್ತಿ ಲಕ್ಷ್ಮೀನಗರ, ಶಂಕರ್ ಅಂಬಲಪಾಡಿ, ಕುಮಾರಿ ವೈಷ್ಣವಿ ಉಡುಪಿ, ಕುಮಾರಿ ನಂದಿನಿ ಅಲೆವೂರು, ಪ್ರಕಾಶ ಸುವರ್ಣ ಕಟಪಾಡಿ ಸಂಕೀರ್ತನೆಗಳನ್ನು ಹಾಡಿದರು. ಬಾಲಪ್ರತಿಭೆ ಯಶಸ್ ಪಿ.ಸುವರ್ಣ ಕೊಳಲುವಾದನದ ಮೂಲಕ ರಂಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News