ಉಡುಪಿ ಜಿಲ್ಲಾ ಅಪರ ಸರಕಾರಿ ವಕೀಲ ರಾಜೀನಾಮೆ

Update: 2020-12-05 12:22 GMT

ಉಡುಪಿ, ಡಿ.5: ಉಡುಪಿ ಜಿಲ್ಲಾ ಅಪರ ಸರಕಾರಿ ವಕೀಲ ಮುಹಮ್ಮದ್ ಸುಹಾನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
2018ರ ಜ.29ರಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ವೈಯಕ್ತಿಕ ಕಾರಣಗಳಿಂದಾಗಿ ಈ ಹುದ್ದೆ ಹಾಗೂ ಜವಾಬ್ದಾರಿಯನ್ನು ನಿರ್ವ ಹಿಸಲು ಸಾಧ್ಯವಾಗದೆ ಇದ್ದು, ಅದಕ್ಕಾಗಿ ಈ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಕಾನೂನು ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗೆ ಸಲ್ಲಿಸಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ನನ್ನಲ್ಲಿರುವ ಸರಕಾರದ ವ್ಯಾಜ್ಯಗಳ ಕಡತಗಳನ್ನು ಸ್ವೀಕರಿಸಲು ಜಿಲ್ಲಾ ಸರಕಾರಿ ವಕೀಲರು ಸಹಮತ ತೋರುತ್ತಿಲ್ಲ. ಆದುದರಿಂದ ಈ ಕಡತಗಳನ್ನು ಯಾರ ಸುಪರ್ದಿಗೆ ನೀಡಬೇಕು ಎಂದು ಕೂಡಲೇ ತಿಳಿಸಬೇಕು. ಈ ಪತ್ರದ ದಿನದಿಂದ ನಾನು ನನ್ನ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಮತ್ತು ಮುಂದಿನ ನ್ಯಾಯಾಲಯದ ಕಲಾಪಗಳಲ್ಲಿ ಸರಕಾರದ ಹಿತಾಸಕ್ತಿಗೆ ನಾನು ಜವಾಬ್ದಾರನಾಗಿರುವು ದಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News