ಅಣುಕು ಪ್ರದರ್ಶನದಲ್ಲಿ ಎಚ್‌ಆರ್‌ಎಸ್ ತಂಡ ಭಾಗಿ

Update: 2020-12-05 12:28 GMT

ಉಡುಪಿ, ಡಿ.5: ಉದ್ಯಾವರದ ಪಾಪನಾಶಿನಿ ಹೊಳೆಯಲ್ಲಿ ಕೇಂದ್ರ ಸರಕಾರದ ಎನ್‌ಡಿಆರ್‌ಎಫ್ ತಂಡ ಹಮ್ಮಿಕೊಂಡಿದ್ದ ಅಣುಕು ಪ್ರದರ್ಶನದಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಎಚ್‌ಆರ್‌ಎಸ್‌ನ ಸುಮಾರು 20 ಸದಸ್ಯರು ಪಾಲ್ಗೊಂಡಿದ್ದರು.

ನೆರೆ ಬಂದಾಗ ಹಾಗೂ ನೀರಿನಲ್ಲಿ ಮುಳುಗಿದಾಗ ವ್ಯಕ್ತಿಯನ್ನು ರಕ್ಷಿಸಿಕೊಳ್ಳುವ ಮತ್ತು ಇತರರನ್ನು ರಕ್ಷಿಸುವ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶನ ನೀಡಲಾ ಯಿತು. ಈ ಪ್ರದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹ ಶಿಲ್ದಾರ್, ಅಗ್ನಿ ಶಾಮಕ ದಳದ ಅಧಿಕಾರಿಗಳು, ಆರೋಗ್ಯ ಇಲಾಖೆಯವರು, ಹೋಮ್ ಗಾರ್ಡ್ ಅಧಿಕಾರಿಗಳು ಭಾಗವಹಿಸಿದ್ದರು.

ಎಚ್‌ಆರ್‌ಎಸ್‌ನ ಕ್ಯಾಪ್ಟನ್ ಅಮೀರ್ ಸಿದ್ದೀಕ್, ಉಡುಪಿಯ ಸಂಚಾಲಕ ಹಸನ್ ಕೋಡಿಬೆಂಗ್ರೆ, ಬಿಲಾಲ್ ಮಲ್ಪೆ, ಅಬ್ದುಲ್ ಗಫೂರ್ ಕುಳಾಯಿ, ಮುನವ್ವರ್, ಅನ್ವರ್ ಅಲಿ ಕಾಪು, ಸಲೀಮ್ ತೀರ್ಥಹಳ್ಳಿ ವೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News