ಮಾನವ ಸಮನ್ವಯ ಸಾಹಿತ್ಯ ಪರಿಷತ್ ವತಿಯಿಂದ ವಿಚಾರಗೋಷ್ಠಿ
ಮಂಗಳೂರು, ಡಿ. 7: ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸಕ್ಕೆ ಎಲ್ಲಾ ಸಮುದಾಯದ ಬರಹಗಾರರು ಮುಂದಾದಾಗ ಶಾಂತಿ, ಸೌಹಾರ್ದ ಮತ್ತು ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸಾಹಿತಿ ಸಾಲೆತ್ತೂರು ಅಬೂಬಕರ್ ಫೈಝಿ ಹೇಳಿದ್ದಾರೆ.
ಮಾನವ ಸಮನ್ವಯ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಡೆದ ‘ಸಾಹಿತ್ಯ ಮತ್ತು ಸಮಾಜ’ ಎಂಬ ಆನ್ಲೈನ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ವಾಂಸ ಎಸ್.ಬಿ.ಮುಹಮ್ಮದ್ ದಾರಿಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಎಚ್.ಭೀಮರಾವ್ ವಿಷಯ ಮಂಡಿಸಿದರು. ಸಾಹಿತಿ ಗಣೇಶ್ ಮಂಜೇಶ್ವರ ದಿಕ್ಸೂಚಿ ಭಾಷಣ ಮಾಡಿದರು. ಎ.ಇಬ್ರಾಹಿಂ ಖಲೀಲ್ ಫೈಝಿ ಪುಣಚ, ಅನ್ಸಾರ್ ಕಾಟಿಪಳ್ಳ, ಎ.ಕೆ.ನಂದಾವರ, ಸುಹೇಚ ಪರಮವಾಡಿ ಹಾವೇರಿ,ಬಿ.ಎಸ್.ಇಸ್ಮಾಯಿಲ್ ಕುತ್ತಾರ್, ಎಂ.ಎ.ಮುಸ್ತಫಾ ಬೆಳ್ಳಾರೆ, ಅಮಿರ್ ಬನ್ನೂರು, ಎ.ಬಿ.ಮೊಹಿದೀನ್ ಕಳಂಜ, ಎಂ.ಬಿ.ಸದಾಶಿವ ಸುಳ್ಯ ಮಾತನಾಡಿದರು.
ಎಂ.ಎಸ್.ಜಲ್ಲಿ, ಬದ್ರುದ್ದೀನ್ ಗರಡಿ,ಅಬ್ದುರ್ರಹ್ಮಾನ್ ತುಂಬೆ, ಬಿ.ಜೆ.ನರಸಿಂಹ ಮೂರ್ತಿ ಬೆಂಗಳೂರು, ಅಡ್ವಕೇಟ್ ಲುಕ್ಮಾನ್ ಸಅದಿ ಅಡ್ಯಾರ್, ಅಫ್ನಾಶ್ರೀ ಕರಾಯ, ಎಲ್.ಎಸ್.ಬಿ. ಹನೀಫಿ ಸಜಿಪ, ಅಲ್ತಾಫ್ ಬಿಳಗುಳ, ಜುನೈದ್ ಉಪ್ಪಳ, ದಿಲೀಪ್ ವೇದಿಕ್ ಕಡಬ, ಕೆ.ಎಂ.ಇಕ್ಬಾಲ್ ಬಾಳಿಲ ಅತಿಥಿಗಳಾಗಿದ್ದರು.
ಮಂಗಳ ಕಲಾ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಸ್ವಾಗತಿಸಿದರು. ಕವಿ ಸಮ್ಯಕ್ತ್ ಜೈನ್ ಕಡಬ ವಂದಿಸಿದರು. ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಿಸಿದರು.