ಇಂಡಿಯನ್ ಸೋಷಿಯಲ್ ಫೋರಂ ಅಸೀರ್, ಸೆಂಟ್ರಲ್ ಕಮಿಟಿ ಉಪಾಧ್ಯಕ್ಷಗೆ ಸನ್ಮಾನ

Update: 2020-12-08 09:47 GMT

ರಿಯಾದ್ : ಸೌದಿ ಅರೇಬಿಯಾದಾದ್ಯಂತ ಸಂಘಟಿತಗೊಂಡಿರುವ ಅನಿವಾಸಿ ಭಾರತೀಯರ ಸಾಮಾಜಿಕ ಸೇವಾ ಸಂಘಟನೆ ಗಲ್ಫ್ ಮಲಯಾಳಿ ಫೆಡರೇಶನ್ ವತಿಯಿಂದ ಇಂಡಿಯನ್ ಸೋಷಿಯಲ್ ಫೋರಂ (ಐಎಸ್ಎಫ್) ಅಸೀರ್ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ  ಹನೀಫ್ ಮಂಜೇಶ್ವರ ಇವರನ್ನು ಸನ್ಮಾನಿಸಲಾಯಿತು. 

ಸನ್ಮಾನಿತರು ಅಸೀರ್ ಪ್ರಾಂತ್ಯದಲ್ಲಿ ಕಳೆದ ಎರಡು ದಶಕಗಳಿಂದ ಅನಿವಾಸಿ ಭಾರತೀಯರ ನೋವುಗಳಿಗೆ ಸ್ಪಂದಿಸುವ ಹಾಗೂ ಮರಣ ಹೊಂದಿದ ಎಲ್ಲಾ ರಾಜ್ಯಗಳ  ಹಲವು ಮೃತದೇಹಗಳ ಕಾನೂನು ಬದ್ಧ ವಿಲೇವಾರಿಗಳ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು, ಅವರು ಇಂಡಿಯನ್ ಕಾನ್ಸುಲೇಟ್ ಅಸೀರ್ ವಲಯದ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಗಲ್ಫ್ ಮಲಯಾಳಿ ಫೆಡರೇಶನ್ ಇದರ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಪವಿತ್ರಂ ಮತ್ತು ಸಂಯೋಜಕರಾದ ರಫೀ ಪಾಂಗೋಡು ಹಾಗೂ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News