ದನಗಳ್ಳತನ ಶಂಕೆ: ಯುವಕನನ್ನು ಥಳಿಸಿ ಕೊಂದ ಗುಂಪು

Update: 2020-12-18 08:38 GMT

ಪಾಟ್ನಾ,ಡಿ.18: ದನಗಳ್ಳನತ ನಡೆಸುತ್ತಿದ್ದಾನೆಂಬ ಸಂಶಯದ ಮೇರೆಗೆ 32 ರ ಹರೆಯದ ವ್ಯಕ್ತಿಯೋರ್ವನನ್ನು ಥಳಿಸಿ ಕೊಂದ ಘಟನೆಯು ಬಿಹಾರದ ಪಾಟ್ನಾ ಸಮೀಪ ನಡೆದಿದೆ. ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿಯನ್ನು ಮುಹಮ್ಮದ್ ಆಲಮ್ ಗಿರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ndtv.com ವರದಿ ಮಾಡಿದೆ.

ಬುಧವಾರ ಬೆಳಗ್ಗೆ ಪಾಟ್ನಾ ಸಮೀಪದ ಫುಲ್ವಾರಿ ಶರೀಫ್ ಎಂಬ ಪ್ರದೇಶದಲ್ಲಿ ಘಟನೆ ನಡೆದಿದೆ. ಬೆಳಗ್ಗಿನ ಜಾವ ಮೂರು ಗಂಟೆಯ ವೇಳೆ ಸಮೀಪದ ದನಗಳ ಕೊಟ್ಟಿಗೆ ಸಮೀಪವಿದ್ದ ಆಲಮ್ ಗಿರ್ ದನಗಳ್ಳತನ ನಡೆಸಲು ಪ್ರಯತ್ನಿಸುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾಗಿ ವರದಿಯಾಗಿದೆ. ಈ ವೇಳೆ 6 ಮಂದಿ ಸೇರಿಕೊಂಡು ಆಲಮ್ ಗಿರ್ ನನ್ನು ಥಳಿಸಿ ಕೊಂದಿದ್ದು, ಆತನ ಜೊತೆಗಿದ್ದ ಇನ್ನೋರ್ವ ಯುವಕ ದುಷ್ಕರ್ಮಿಗಳ ಕೈಯಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಪ್ರಕರಣದ ಸಂಬಂಧ 6 ಮಂದಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News