ಗ್ರಾಪಂ ಅಭ್ಯರ್ಥಿಗೆ ಕೊಲೆಬೆದರಿಕೆ: ದೂರು

Update: 2020-12-19 16:26 GMT

ಕೊಲ್ಲೂರು, ಡಿ.19: ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಯೊಬ್ಬರಿಗೆ ವಿರುದ್ಧ ಪಕ್ಷದವರು ಕೊಲೆಬೆದರಿಕೆ ಹಾಕಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಡ್ಸೆ ಗ್ರಾಮದ 3ನೇ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿ ಸುತ್ತಿರುವ ವಂಡ್ಸೆ ಗ್ರಾಮದ ಪ್ರಶಾಂತ್ ಪೂಜಾರಿ(38) ಎಂಬವರಿಗೆ ಡಿ.17 ರಂದು ರಾತ್ರಿ ವೇಳೆ ವಂಡ್ಸೆ ಗ್ರಾಮದ ಕೆಳಪೇಟೆ ರಿಕ್ಷಾ ನಿಲ್ದಾಣದ ಎದುರುಗಡೆ ಕಾಂಗ್ರೆಸ್ ಪಕ್ಷದ ಸಂಜೀವ ಪೂಜಾರಿ ಕಾರಿನಲ್ಲಿ ಬಂದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News