ಬೆಳ್ತಂಗಡಿ: ದ್ವಿಚಕ್ರ ವಾಹನಗಳ ನಡುವೆ ಅಪಘಾತ; ಯುವಕ ಮೃತ್ಯು

Update: 2020-12-22 09:09 GMT

ಬೆಳ್ತಂಗಡಿ, ಡಿ.22: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ನಡ ಗ್ರಾಮದ ಕೆಳಗಿನ ಮಂಜೊಟ್ಟಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ದ್ವಿಚಕ್ರ ವಾಹನ ಸವಾರ ಸವಾರ ಮಲವಂತಿಗೆ ಗ್ರಾಮದ ಮೇಗಿನ ಕರಿಯಾಲು ಜನಾರ್ದನ ಗೌಡ ಎಂಬವರ ಪುತ್ರ ಗೋಪಾಲ ಕೃಷ್ಣ(19) ಮೃತಪಟ್ಟವರು.

ನಾವೂರು ಗ್ರಾಮದ ಬೊಲ್ಲೊಟ್ಟು ಪ್ರದೀಶ್ ಎಂಬವರು ಬೆಳ್ತಂಗಡಿಯಿಂದ ನಾವೂರು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಕಿಲ್ಲೂರಿನಿಂದ ಬೆಳ್ತಂಗಡಿಯ ಕಡೆಗೆ ಬರುತ್ತಿದ್ದ ಗೋಪಾಲಕೃಷ್ಣ ಗೌಡ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಗೋಪಾಲಕೃಷ್ಣ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಪ್ರದೀಶ್ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News