ಎಸ್ಸೆಸ್ಸೆಫ್ ಒಂಬತ್ತುಕೆರೆ ಶಾಖೆ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Update: 2020-12-25 16:36 GMT

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಒಂಭತ್ತುಕೆರೆ ಶಾಖೆ ವಾರ್ಷಿಕ ಮಹಾಸಭೆ ನಿಝಾಮ್ ರವರ ಮನೆಯಲ್ಲಿ ಸೆಕ್ಟರ್ ಸೆಲೆಕ್ಷನ್ ಆಫೀಸರ್ ಹಾಶಿರ್ ಕೋಡಿಯವರ ಉಪಸ್ಥಿತಿಯಲ್ಲಿ ನಡೆಯಿತು.

ಶಾಖಾ ಅಧ್ಯಕ್ಷ ಹಸನ್ ಜಾಬಿರ್ ಫಾಳಿಲಿಯವರ ದುಆ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಮುಹಮ್ಮದ್ ಇರ್ಷಾದ್ ಹಿಮಮಿ ವಾರ್ಷಿಕ ವರದಿ ಮಂಡಿಸಿದರು. ಸಮದ್ ಅಹ್ಸನಿ ಉಸ್ತಾದರು ತರಗತಿ ನಡೆಸಿಕೊಟ್ಟರು. 

ಬಳಿಕ ಪ್ರಸ್ತುತ ಸಮಿತಿಯನ್ನು ವಿಸರ್ಜಿಸಿ 2020-21 ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಇರ್ಷಾದ್ ಹಿಮಮಿ, ಪ್ರಧಾನ ಕಾರ್ಯದರ್ಶಿಯಾಗಿ ರಯಾನ್ ಒಂಬತ್ತು ಕೆರೆ, ಹಣಕಾಸು ಕಾರ್ಯದರ್ಶಿಯಾಗಿ ಡ್ಯಾನಿಷ್ ಒಂಬತ್ತು ಕೆರೆ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಶೌಕತ್ ಸುಲ್ತಾನಿ, ಕ್ಯಾಂಪಸ್  ಕಾರ್ಯದರ್ಶಿಯಾಗಿ ಶಾದ್ ಒಂಬತ್ತು ಕೆರೆ, ರೈನ್ಬೋ ಕನ್ವೀನರ್ ಆಗಿ ಶಾಹಿನ್, ಕಾರ್ಯದರ್ಶಿಗಳಾಗಿ ನಿಝಾಮ್, ನೌಫಲ್, ರಾಝಿ ಮತ್ತು ಜಂಶೀರ್ ಆಯ್ಕೆಯಾದರು. ಐದು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News