ರೈತರ ಪ್ರತಿಭಟನೆ: ಎನ್.ಡಿ.ಎ ಮೈತ್ರಿಕೂಟ ತ್ಯಜಿಸಿದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ

Update: 2020-12-26 12:09 GMT

ಜೈಪುರ,ಡಿ.26: ಕೇಂದ್ರ ಸರಕಾರವು ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಹನುಮಾನ್ ಬೆನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯು ಎನ್ಡಿಎ ಮೈತ್ರಿಕೂಟವನ್ನು ತ್ಯಜಿಸಿದೆ ಎಂದು ndtv.com ವರದಿ ಮಾಡಿದೆ.

ಹನುಮಾನ್ ಬೆನಿವಾಲ್ ಈಗಾಗಲೇ ಮೂರು ಸಂಸದೀಯ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಹಲವು ಬಾರಿ ಕೇಂದ್ರ ಸರಕಾರಕ್ಕೆ ಈ ಕುರಿತಾದಂತೆ ಎಚ್ಚರಿಕೆ ನೀಡಿದ್ದು, ಇದೀಗ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯು ಎನ್ಡಿಎ ಮೈತ್ರಿಕೂಟವನ್ನು ತ್ಯಜಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News