ಅಡಿಕೆ ಕಳವು: ದೂರು

Update: 2020-12-26 16:07 GMT

ಶಂಕರನಾರಾಯಣ, ಡಿ.26: ಮನೆಯಂಗಳದಲ್ಲಿ ಇಟ್ಟಿದ್ದ ಸಾವಿರಾರು ರೂ. ವೌಲ್ಯದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಉಳ್ಳೂರು 74 ಗ್ರಾಮದ ಕಾನಹೊಳೆ ಎಂಬಲ್ಲಿ ಡಿ.23ರಂದು ನಡೆದಿದೆ.

ಬೇಳಂಜೆ ಗ್ರಾಮದ ಹಣೆಗೋಡುವಿನ ಶಿವರಾಮ ನಾಯ್ಕ, ಅರುಣ್ ನಾಯ್ಕ, ಅಮ್ಯಾಸೆಬೈಲಿನ ಶ್ರೀಧರ ಹೆಮ್ಮಣ್ಣು ಎಂಬವರು ಗುಲಾಬಿ ನಾಯ್ಕ ಎಂಬವರ ಮನೆಯ ಅಂಗಳದಲ್ಲಿ ಗೋಣಿ ಚೀಲದಲ್ಲಿ ತುಂಬಿಸಿ ಇಟ್ಟಿದ ಸುಮಾರು 6000 ರೂ. ಮೌಲ್ಯದ ಅಡಿಕೆಯನ್ನು ಬೈಕಿನಲ್ಲಿ ಕಳವು ಮಾಡಿ ಕೊಂಡು ಹೋಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News