ಮತ ಹಾಕುವಂತೆ ಜೀವಬೆದರಿಕೆ: ದೂರು

Update: 2020-12-26 16:46 GMT

ಹಿರಿಯಡ್ಕ, ಡಿ.26: ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬ ಮತ ಹಾಕುವಂತೆ ಜೀವಬೆದರಿಕೆಯೊಡ್ಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.18ರಂದು ಅತ್ರಾಡಿ ಗುರು ಹೋಟೇಲ್ ಬಳಿ ಆತ್ರಾಡಿ ಮದಗ ನಿವಾಸಿ ಸುಭಾಸ್ ನಾಯ್ಕ(60) ಎಂಬವರಿಗೆ ಅಭ್ಯರ್ಥಿ ದಿನೇಶ್ ಎಂಬಾತ ನನಗೆ ಓಟು ಹಾಕಬೇಕು ಇಲ್ಲದಿದ್ದರೆ ನಾನು ನಿನ್ನನ್ನು ಬಿಡುವುದಿಲ್ಲ ಎಂದು ಅವ್ಯಾಚ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News