ರಾಜಸ್ಥಾನ-ಹರ್ಯಾಣ ಗಡಿಯಲ್ಲಿ ಬ್ಯಾರಿಕೇಡ್ ಗಳನ್ನು ಮುರಿದು ದಿಲ್ಲಿಯತ್ತ ಸಾಗಿದ ರೈತರು

Update: 2020-12-31 15:41 GMT

ಹೊಸದಿಲ್ಲಿ: ರಾಜಸ್ಥಾನ-ಹರ್ಯಾಣ ಗಡಿಯಲ್ಲಿ ರೆವಾರಿ ಪೊಲೀಸರು ರಸ್ತೆಗೆ ಅಡ್ಡವಾಗಿ ಇರಿಸಿದ್ದ ಬ್ಯಾರಿಕೇಡ್ ಗಳನ್ನು ರೈತರು ಮುರಿದು ದಿಲ್ಲಿಯತ್ತ ಸಾಗಿದ್ದಾರೆ. ಜಲಪ್ರಯೋಗ ಮತ್ತು ಅಶ್ರುವಾಯು ಪ್ರಯೋಗಿಸಿ ರೈತರನ್ನು ತಡೆಯಲು ಯತ್ನಿಸಿದರು.

20ರಿಂದ 25 ಟ್ರ್ಯಾಕ್ಟರ್ ಗಳಿಂದ ಬ್ಯಾರಿಕೇಡ್ ಗಳನ್ನು ಮುರಿಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ಅವರು ದಿಲ್ಲಿಯೆಡೆಗೆ ಸಾಗುತ್ತಿದ್ದಾರೆ. ಭುದ್ಲಾ ಫ್ಲೈಓವರ್ ಬಳಿ ಅವರನ್ನು ತಡೆಯಲು ನಾವು ಮತ್ತೊಮ್ಮೆ ಪ್ರಯತ್ನಿಸುತ್ತೇವೆ” ಎಂದು ಬವಾಲ್ ಡಿಎಸ್ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News