ಸ್ಕೂಟರ್ ಸ್ಕಿಡ್, ಕಾರು ಢಿಕ್ಕಿ: ಸವಾರ ಸಾವು

Update: 2020-12-31 15:47 GMT

ಪಡುಬಿದ್ರಿ: ಸ್ಕೂಟರ್ ಸ್ಕಿಡ್ ಆಗಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಕಾರ್ಕಳ ತಾಲ್ಲೂಕಿನ ಕುಂಟಲ್ಪಾಡಿಯ ನಿವಾಸಿ ಅಶ್ವಿಲ್ ಸ್ಯಾಮ್‍ಸನ್ ಸೋನ್ಸ್ (22) ಎಂದು ಗುರುತಿಸಲಾಗಿದೆ. ಈತ ತನ್ನ  ಸ್ಕೂಟರ್‍ನಲ್ಲಿ ಕಾರ್ಕಳದಿಂದ ಪಡುಬಿದ್ರಿಯತ್ತ ಸಂಚರಿಸುತಿದ್ದ. ಈ ವೇಳೆ ಸ್ಕೂಟರ್ ಸ್ಕಿಡ್ ಆಗಿ ಪಡುಬಿದ್ರಿಯತ್ತ ಬರುತ್ತಿದ್ದ ಇಕೋ ಕಾರಿಗೆ ಢಿಕ್ಕಿಯಾಗಿದೆ. ತಿಳಿದುಬಂದಿದೆ. 

ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News