ಅಮಾಸೆಬೈಲು: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು
Update: 2020-12-31 17:19 GMT
ಅಮಾಸೆಬೈಲು, ಡಿ.31: ತೆಂಗಿನಕಾಯಿ ಕೊಯ್ಯಲೆಂದು ಮರ ಹತ್ತಿದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಹೊಸಂಗಡಿ ಗ್ರಾಮದ ಅಬ್ಬಿಬೇರು ಎಂಬಲ್ಲಿಂದ ವರದಿಯಾಗಿದೆ.
ಸಿದ್ಧಾಪುರ ಗ್ರಾಮದ ಹೊರಳಿಜಡ್ಡು ಎಂಬಲ್ಲಿ ವಾಸವಾಗಿರುವ ಮಂಜುನಾಥ ಕುಲಾಲ (50) ಮೃತಪಟ್ಟವರು. ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಬುಧವಾರ ಅಬ್ಬಿಬೇರುವಿನ ಶೇಖರ ಕುಲಾಲರ ಮನೆಯ ತೋಟದ ತೆಂಗಿನ ಮರದ ಕಾಯಿಗಳನ್ನು ಕೀಳಲು ಮರ ಏರಿದ್ದರು. 11ಗಂಟೆ ಸುಮಾರಿಗೆ ಅಕಸ್ಮಿಕ ವಾಗಿ ಕೈತಪ್ಪಿ ತೆಂಗಿನ ಮರದಿಂದ ಬಿದ್ದು ಗಂಬೀರ ಗಾಯಗೊಂಡು ಕುಂದಾಪುರ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.