ಸುರತ್ಕಲ್: ಸಮುದ್ರದ ಅಲೆಗೆ ಸಿಲುಕಿ ಬಾಲಕ ಮೃತ್ಯು

Update: 2021-01-02 16:24 GMT

ಸುರತ್ಕಲ್, ಜ.2: ಇಲ್ಲಿನ ಚಿತ್ರಾಪುರ ಕಡಲತೀರದಲ್ಲಿ ಈಜುತ್ತಿದ್ದ ಬಾಲಕನೊಬ್ಬ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಬಾಗಲಕೋಟೆಯ ಆಕಾಶ್(13) ಮೃತಪಟ್ಟ ಬಾಲಕ. ಈತ ಸಂಜೆ ಸುಮಾರು 4 ಗಂಟೆಯ ವೇಳೆಗೆ ಸಮುದ್ರದಲ್ಲಿ ಈಜಲು ತೆರಳಿದ್ದ. ಈತನ ಜೊತೆ ಇತರ ಮೂವರು ಕೂಡ ಇದ್ದರು. ಮೂವರು ಅಪಾಯದಿಂದ ಪಾರಾಗಿದ್ದರೆ, ಆಕಾಶ್ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿದ್ದಾನೆ. ಬಳಿಕ 6 ಗಂಟೆಯ ವೇಳೆಗೆ ಹೊಸಬೆಟ್ಟು ಬಳಿ ಬಾಲಕನ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News