ಕಾಪು ಬೀಚ್: ನಾಲ್ವರು ಯುವಕರ ರಕ್ಷಣೆ

Update: 2021-01-02 16:29 GMT

ಕಾಪು : ಕಾಪು ಬೀಚ್‍ಗೆ ಬಂದಿದ್ದ ನಾಲ್ವರು ಯುವಕರು ಸಮುದ್ರದಲ್ಲಿ ಈಜುತಿದ್ದ ವೇಳೆ ಸಮುದ್ರ ಪಾಲಾಗುತಿದ್ದ ಸ್ಥಳೀಯರು ರಕ್ಷಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ನೀರು ಪಾಲಾಗುತ್ತಿದ್ದವರನ್ನು ಪರಶಿವ ಮೂರ್ತಿ, ರಾಹುಲ್, ತೇಜಸ್ ಮತ್ತು ಪವನ್ ಕುಮಾರ್ ಎಂದು ಗುರುತಿಸಲಾಗಿದೆ.

ಮೈಸೂರು - ಮಂಡ್ಯ ಮೂಲದ ಇವರು ಶನಿವಾರ ಸಂಜೆ ಕಾಪು ಬೀಚ್‍ಗೆ ಆಗಮಿಸಿ ಇವರು ಸಮುದ್ರದ ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ನೀರಿನಲ್ಲಿ ಆಟವಾಡುತ್ತಾ ಮುಂದೆ ಹೋದ ಯುವಕರು ಸಮುದ್ರ ಪಾಲಾಗುವ ಭೀತಿ ಎದುರಿಸಿದ್ದರು. ಯುವಕರು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಕಾಪು ಬೀಚ್ ನಿರ್ವಹಣಾ ತಂಡದ ಸದಸ್ಯರು ಮತ್ತು ಬೀಚ್ ರಕ್ಷಣಾ ತಂಡದ ಸದಸ್ಯರು ಎಚ್ಚರಿಕೆ ನೀಡಿದರು. ಈ ವೇಳೆ ಇಬ್ಬರು ದಡದತ್ತ ಬರಲಾರಂಭಿಸಿದ್ದರು.  ಇಬ್ಬರು ಯುವಕರು ಮತ್ತಷ್ಟು ಅಪಾಯದ ಸ್ಥಿತಿಯನ್ನು ಎದುರಿಸಲಾರಂಭಿಸಿದ್ದರು.

ಸ್ದಳಕ್ಕೆ ಧಾವಿಸಿದ ಬೀಚ್ ನಿರ್ವಹಣಾ ಉಸ್ತುವಾರಿ ಪ್ರಶಾಂತ್ ಕರ್ಕೇರ ಮತ್ತವರ ಸಂಗಡಿಗರಾದ ಪ್ರಥಮ್, ಸ್ಕೂಬಾ ಡೈವಿಂಗ್ ಪರಿಣತರಾದ ಜಾಕ್ಸನ್ ಮತ್ತು ಪ್ರದೀಪ್ ಕುಮಾರ್ ಸಮುದ್ರಕ್ಕೆ ಇಳಿದು ಯುವಕರನ್ನು ರಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News