​ಮೇಲ್ತೆನೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ

Update: 2021-01-02 17:22 GMT

ಮಂಗಳೂರು, ಜ.2: ನೂತನ ‘ಮೇಲ್ತೆನೆ ವೆಬ್ ಪೋರ್ಟಲ್’ನ್ನು ಪಸರಿಸುವ ಸಲುವಾಗಿ ಆಯೋಜಿಸಿದ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಮುಂಚಿತವಾಗಿ ತಿಳಿಸಲಾದ ಮಾನದಂಡಗಳನ್ನು ಆಧರಿಸಿ ಬಹುಮಾನ ಕೊಡುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮರಿಯಂ ಇಸ್ಮಾಯೀಲ್ ಅವರ ‘ಕುಲ್ತೆ ಕಂಞಿ ಮಾಙೆರೆ ಉಪ್ಕರಿ’ (ಪ್ರಥಮ), ಅಬ್ದುಲ್ ಖಾದರ್ ಜೀವನ್ ಜ್ಯೋತಿ ಅವರ ‘ದುನಿಯಾವು’ (ದ್ವಿತೀಯ), ಹಫ್ಸಾ ಬಾನು ಬೆಂಗಳೂರು ಅವರ ‘ಉಮ್ಮರೆ ಕೈ ತೆನಸ್’ (ತೃತೀಯ) ಕವನವು ಬಹುಮಾನಕ್ಕೆ ಆಯ್ಕೆಗೊಂಡಿರುವ ಬಗ್ಗೆ ಮೇಲ್ತೆನೆ ವೆಬ್ ಪೋರ್ಟಲ್ ಸಂಪಾದಕ ಬಶೀರ್ ಅಹ್ಮದ್ ಕಿನ್ಯ ಇತ್ತೀಚೆಗೆ ವಾರ್ಷಿಕ ಸಭೆಯಲ್ಲಿ ಪ್ರಕಟಿಸಿದರು.

ವಿಜೇತರಿಗೆ 1000, 500, 300 ರೂ. ಮೌಲ್ಯದ ಪುಸ್ತಕಗಳನ್ನು ಬಹುಮಾನಗಳನ್ನು ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಮೇಲ್ತೆನೆಯ ನೂತನ ಪ್ರಧಾನ ಕಾರ್ಯದರ್ಶಿ ಅಶೀರುದ್ದೀನ್ ಆಲಿಯಾ ಮಂಜನಾಡಿಯಲ್ಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News